ದಿನಕ್ಕೊಂದು ಕವಿ ಪರಿಚಯ - ಎಂ. ಗೋವಿಂದ ಪೈ | ಕನ್ನಡದ ಮೊದಲ ರಾಷ್ಟ್ರಕವಿ
ದಿನಕ್ಕೊಂದು ಕವಿ ಪರಿಚಯ
ಎಂ. ಗೋವಿಂದ ಪೈ
ಜನನ: ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ.
* ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.
* ಕವನ ಸಂಕಲನಗಳು:
ಗಿಳಿವಿಂಡು,
ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ,
ಸಿಂಗಾಲ ಸುತ್ತ ಬೌದ್ಧ ಸೂತ್ರಗಳ ಕನ್ನಡ ಅನುವಾದ.
* 35 ವೃತ್ತಗಳುಳ್ಳ ಪ್ರಾಸ ರಹಿತ ಗೊಮ್ಮಟ ಜಿನಸ್ತುತಿಯನ್ನು ರಚಿಸಿ ಪ್ರಕಟಿಸಿದರು.
* ಖಂಡಕಾವ್ಯಗಳು:
ವೈಶಾಖ ಮತ್ತು ಗೊಲ್ಗೊಥಾ.
* ಕೃತಿಗಳು:
ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ ಚಿತ್ರಭಾನು, ಹೆಬ್ಬೆರಳು, ಪಾಶ್ರ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದವು.
* ಅವರಿಗೆ 1949 ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ.
* ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು.

Comments
Post a Comment